
ಬೆಳಗ್ಗೆ ಎದ್ದ ಕೂಡಲೇ ಹೊಸ ದಿನದ ಶುಭಾರಂಭವನ್ನು ನಮ್ಮ ಹಸ್ತಗಳನ್ನು ನೋಡಿ, ಕಾಲಿಡುವ ಭೂಮಿಗೆ ನಮಸ್ಕರಿಸಿ ಪ್ರಾರಂಭಿಸಬೇಕು. ಮುಖ ತೊಳೆದು, ಹಲ್ಲುಜ್ಜಿ ಶುಭ್ರವಾದ ಮೇಲೆ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು.
ಹೀಗೆ ಸ್ವಲ್ಪ ವ್ಯಾಯಾಮ, ನಡೆಯುವುದು ಅಥವಾ ಓಡುವ ಅಭ್ಯಾಸವಿದ್ದರೆ ದೇಹಕ್ಕೆ ಕೆಲಸ ಕೊಟ್ಟು ಮೈಯನ್ನು ಸಡಿಲಗೊಳಿಸಬೇಕು. ಅನಂತರ ಮತ್ತೆ ಶುಭ್ರವಾಗಿ ಕೆಲವು ಆರೋಗ್ಯಯುತ ಆಹಾರವನ್ನು ಸೇವಿಸಬೇಕು. ಅದರಲ್ಲಿ ಕೆಲವನ್ನು ಈ ಲೇಖನದ ಮೂಲಕ ತಿಳಿಯೋಣ.
ಹೆಲ್ತ್ ಡ್ರಿಂಕ್ ರೆಸಿಪಿ 1
ಬೇಕಾಗುವ ಪದಾರ್ಥಗಳು
- ತುರಿದ ಮುಳ್ಳು ಸೌತೆಕಾಯಿ 1 ಕಪ್
- ಬೂದುಗುಂಬಳ ಕಾಯಿ 1 ಕಪ್ ( ಸಣ್ಣಗೆ ಹೆಚ್ಚಿದ್ದು)
- ನಿಂಬೆ ರಸ 2 ಚಮಚ
- ಕರಿ ಮೆಣಸಿನ ಪುಡಿ ½ ಚಮಚ
- ಪುದೀನಾ ಎಲೆ 4
- ರುಚಿಗೆ ತಕ್ಕಸ್ಟು ಉಪ್ಪು
ಮಾಡುವ ವಿಧಾನ
ಸಣ್ಣಗೆ ಹೆಚ್ಚಿದ ಬೂದುಗುಂಬಳ ಕಾಯಿ ಹಾಗು ಪುದೀನಾ ಎಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಶೋಧಿಸಿ ಅದಕ್ಕೆ ಸೌತೆಕಾಯಿ ತುರಿಯನ್ನು ಸೇರಿಸಿ, ನಿಂಬೆ ರಸವನ್ನು ಕೂಡ ಸೇರಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೇಲೆ ಎರಡು ಪುದೀನಾ ಎಲೆಯನ್ನು ಹಾಕಬೇಕು. ಅಲ್ಲಿಗೆ ಮಾರ್ನಿಂಗ್ ಡ್ರಿಂಕ್ ರೆಡಿ ಟು ಡ್ರಿಂಕ್.
ಪ್ರಯೋಜನಗಳು
- ಬೆಳಿಗ್ಗೆ ಕುಡಿಯುದರಿಂದ ದಿನವಿಡೀ ದೇಹವು ಹಗುರಾಗಿ ಇರುವಂತೆ ನೋಡಿಕೊಂಡು ಚುರುಕಾಗಿರುವಂತೆ ಹಾಗು ಸಂತೋಷದಿಂದ ಇರಲು ಸಹಕವಾಗಿದೆ.
- ಇದನ್ನು ಗುಟುಕು ಗುಟುಕು ಆಗಿ ಕುಡಿಯಬೇಕು. ಹೀಗೆ ಕುಡಿಯುವುದರಿಂದ ಲಾಲಸರ ಉತ್ಪತ್ತಿ ಹೆಚ್ಚಾಗಿ ಜೀರ್ಣಕ್ರಿಯೆ ಉತ್ತಮವಾಗಿ ಹೊಟ್ಟೆ ಶುದ್ಧವಾಗಿರುತ್ತದೆ.
- ಅನವಶ್ಯಕ ಬೊಜ್ಜು ಕರಗುತ್ತದೆ.
- ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
- ಮೂತ್ರಕೋಶ ಮತ್ತು ಮೂತ್ರ ಪಿಂಡಗಳ ಆರೋಗ್ಯಕ್ಕೆ ಉತ್ತಮವಾಗಿದೆ.
- ಹೊಟ್ಟೆಯಲ್ಲಿನ ಕರುಳು ಹುಣ್ಣುಗಳಿಗೂ ಉತ್ತಮ ಮದ್ದಾಗಿದೆ.
- ಗಂಟಲು ಒಣಗುವಿಕೆ ಸಮಸ್ಯೆಗೆ ಒಳ್ಳೆಯ ಪಾನೀಯ.
ಹೆಲ್ತ್ ಡ್ರಿಂಕ್ ರೆಸಿಪಿ 2
ಬೇಕಾಗುವ ಪದಾರ್ಥಗಳು
- ಬೂದುಗುಂಬಳ ಕಾಯಿ 1 ಕಪ್
- ಪುದಿನ ಎಲೆಗಳು 5
- ಸೌತೆಕಾಯಿ 1
- ನಿಂಬೆ ರಸ 2 ಚಮಚ
- ಕರಿಮೆಣಸಿನ ಪುಡಿ ½ ಚಮಚ
- ಉಪ್ಪು
ಮಾಡುವ ವಿಧಾನ
ಬೂದುಗುಂಬಳ ಕಾಯನ್ನು ಹೆಚ್ಚಿಕೊಂಡು, ಪುದಿನ ಎಲೆಗಳನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಶೋಧಿಸಿಕೊಳ್ಳಬೇಕು. ಸೌತೆಕಾಯಿಯನ್ನು ತುರಿದುಕೊಂಡು ಈ ರಸಕ್ಕೆ ಸೇರಿಸಬೇಕು. ಅನಂತರ ಲಿಂಬೆರಸ, ಹಾಗೂ ಉಪ್ಪನ್ನು ರುಚಿಗೆ ತಕ್ಕಷ್ಟು ಸೇರಿಸಿದರೆ ಬೆಳಗಿನ ಹೆಲ್ತ್ ಡ್ರಿಂಕ್ ಬುದುಗುಂಬಳಕಾಯಿ ಜ್ಯೂಸ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ತೂಕ ಇಳಿಸಲು ಉತ್ತಮ ಡ್ರಿಂಕ್ ಇದಾಗಿದೆ. ಹೊಟ್ಟೆಯಲ್ಲಿನ ಬೊಜ್ಜನ್ನು ಕರಗಿಸಲು ಉತ್ತಮವಾಗಿದೆ.
- ಬಾಯಾರಿಕೆ, ಗಂಟಲು ಒಣಗುವಿಕೆಯನ್ನು ಕಡಿಮೆ ಮಾಡಿಸುತ್ತದೆ.
- ಮೂತ್ರಕೋಶ ಹಾಗೂ ಮೂತ್ರಪಿಂಡಗಳ ಸ್ವಚ್ಛತೆಗೆ ಸಹಾಯ ಮಾಡುತ್ತದೆ.
- ಕರುಳಿನ ಹುಣ್ಣುಗಳಿಗೂ ಉತ್ತಮವಾಗಿದೆ.
- ಮಲಬದ್ಧತೆಯನ್ನು ನಿವಾರಿಸುತ್ತದೆ.
- ಜೀರ್ಣಕ್ರಿಯೆಯನ್ನು ಉತ್ತೇಜಸುತ್ತದೆ, ಹೊಟ್ಟೆಯನ್ನು ಶುದ್ಧವಾಗಿರಿಸುತ್ತದೆ.
- ಹೆಚ್ಚಿನ ನಾರಿನ ಅಂಶವನ್ನು ದೇಹಕ್ಕೆ ಒದಗಿಸುತ್ತದೆ.
- ಬೆಳಿಗ್ಗೆ ಪ್ರತಿದಿನ ಒಮ್ಮೆ ಕುಡಿಯುವುದರಿಂದ ದಿನವಿಡಿ ಉಲ್ಲಾಸದಿಂದ, ಆಯಾಸವನ್ನು ದೂರಮಾಡಿಕೊಂಡಿರಬಹುದು.
ಶಕ್ತಿ ವರ್ಧನೆಗೆ ಉಪಯುಕ್ತವಾಗಿರುವ ಮನೆಮದ್ದುಗಳು
1. ಒಣ ಹಣ್ಣಿನ ಜಾಮ್ (Dry Fruit Jam)
ಬೇಕಾಗುವ ಪದಾರ್ಥಗಳು
- ಅಂಜೂರ 50 ಗ್ರಾಂ
- ಖರ್ಜುರ 50 ಗ್ರಾಂ
- ಒಣ ದ್ರಾಕ್ಷಿ 100 ಗ್ರಾಂ
- ತುಪ್ಪ 50 ಗ್ರಾಂ
- ಜೇನುತುಪ್ಪ 25 ಗ್ರಾಂ
ಮಾಡುವ ವಿಧಾನ
ಮೊದಲಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಅಂಜೂರ, ಖರ್ಜುರ, ಒಣದ್ರಾಕ್ಷಿ ಮೂರನ್ನು ಸೇರಿಸಿ ಜೇನುತುಪ್ಪಡೊಡನೆ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ತುಪ್ಪ ಹಾಕಿ, ರುಬ್ಬಿದ ಮಿಶ್ರಣವನ್ನು ಸೇರಿಸಬೇಕು. ಸ್ವಲ್ಪ ತುಪ್ಪ ಹಾಕುತ್ತಾ, ಕೈ ಆಡಿಸುತ್ತ ಇರಬೇಕು. ಪಾತ್ರೆ ಬಿಡುವವರೆಗೂ ಕೈ ಆಡಿಸುತ್ತಾ ಇರಬೇಕು. ಯಾವುದೇ ರೀತಿಯ ಸಕ್ಕರೆ ಬೆಲ್ಲವನ್ನು ಸೇರಿಸುವಂತಿಲ್ಲ. ಪೂರ್ತಿ ತಳ ಬಿಟ್ಟ ನಂತರ ಒಂದು ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು. ಇದನ್ನು ಪ್ರತಿದಿನ ಬೆಳಿಗ್ಗಿನ ಉಪಹಾರದ ಮುಂಚೆ ಒಂದು ಚಮಚ ತಿನ್ನಬೇಕು.
ಪ್ರಯೋಜನಗಳು
- ದೇಹದಲ್ಲಿನ ರಕ್ತದ ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ರಕ್ತವನ್ನು ವೃದ್ಧಿಸುತ್ತದೆ.
- ನರ ದೌರ್ಬಲ್ಯ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ.
- ಅರೋಗ್ಯವರ್ಧಕವಾಗಿದ್ದು, ದೇಹದ ಸರ್ವ ರೀತಿಯ ಅರೋಗ್ಯಕ್ಕೂ ಅತಿ ಉತ್ತಮವಾಗಿದೆ.
2. ನೆಲ್ಲಿಕಾಯಿ ಜಾಮ್ (Amla Jam)
ಬೇಕಾಗುವ ಪದಾರ್ಥಗಳು
- ಬೆಟ್ಟದ ನೆಲ್ಲಿಕಾಯಿ 10
- ಜೇನುತುಪ್ಪ 200 ಮಿಲಿ
ಮಾಡುವ ವಿಧಾನ
ಬೆಟ್ಟದ ನೆಲ್ಲಿಕಾಯನ್ನು ಬೀಜ ತೆಗೆದು ಸಣ್ಣ ತುಣುಕುಗಳಾಗಿ ಕತ್ತರಿಸಬೇಕು. ಒಂದು ಗಾಜಿನ ಪಾತ್ರೆಯಲ್ಲಿ ಬೆಟ್ಟದನೆಲ್ಲಿಕಾಯಿಯ ತುಣುಕನ್ನು ಹಾಕಿ ಮೇಲಿಂದ ಜೇನುತುಪ್ಪವನ್ನು ಸುರಿಯಬೇಕು. ಬೆಟ್ಟದ ನೆಲ್ಲಿಕಾಯಿ ಸರಿಯಾಗಿ ಜೇನುತುಪ್ಪದಲ್ಲಿ ಮುಳುಗಬೇಕು. ಅದನ್ನು ಗಟ್ಟಿಯಾಗಿ ಮುಚ್ಚಿ ಗಾಳಿ, ನೀರು ತಾಕದಂತೆ ಒಂದು ತಿಂಗಳ ಕಾಲ ಇಡಬೇಕು. ನಂತರ ನೆಲ್ಲಿಕಾಯಿಯನ್ನು ತೆಗೆದು ಬಿಡಬೇಕು. ಆ ಜೇನುತುಪ್ಪವನ್ನು ದಿನಕ್ಕೆ ಎರಡು ಬಾರಿಯಂತೆ ಒಂದು ಚಮಚ ಸೇವಿಸಬೇಕು.
ಪ್ರಯೋಜನಗಳು
- ನೆಲ್ಲಿಕಾಯಿ ಜಾಮ್, ಇದು ಅರೋಗ್ಯವರ್ಧಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಶರೀರಕ್ಕೆ ಹೊಸ ಚೈತನ್ಯ ಕೊಡುವುದಲ್ಲದೆ ಬಲವರ್ಧನೆಗೂ ಪೂರಕವಾಗಿರುತ್ತದೆ.
3. ಈರುಳ್ಳಿ ಟಾನಿಕ್ (Onion Tonic)
ಬೇಕಾಗುವ ಪದಾರ್ಥಗಳು
- ಈರುಳ್ಳಿ ರಸ 2 ಚಮಚ
- ತುಪ್ಪ 1 ಚಮಚ
- ಜೇನುತುಪ್ಪ ½ ಚಮಚ
ಮಾಡುವ ವಿಧಾನ
ಈ ಈರುಳ್ಳಿ ಟಾನಿಕ್ ಅನ್ನು ಆಗಲೇ ಮಾಡಿ ಆಗಲೇ ಕುಡಿಯಬೇಕು. ಮೊದಲಿಗೆ ಈರುಳ್ಳಿಯನ್ನು ಜಜ್ಜಿ ಅದರ ರಸವನ್ನು ಹಿಂಡಿ ತೆಗೆದುಕೊಳ್ಳಬೇಕು. ಈ ಈರುಳ್ಳಿ ರಸಕ್ಕೆ ಒಂದು ಚಮಚ ತುಪ್ಪ, ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ, ಒಂದು 40 ದಿನಗಳ ಕಾಲ ಸೇವಿಸಬೇಕು.
ಪ್ರಯೋಜನಗಳು
- ತಲೆನೋವು, ಮೈಗ್ರೆನ್ ನಂತಹ ಸಮಸ್ಯೆಗಳಿಗೂ ಉತ್ತಮವಾಗಿದೆ.
- ಶರೀರದಲ್ಲಿ ಉತ್ತಮ ಶಕ್ತಿಯನ್ನು ಸಹ ನೀಡುತ್ತದೆ.
- ಅರೋಗ್ಯವರ್ಧಕವು ಕೂಡ ಆಗಿದೆ ಈ ಈರುಳ್ಳಿ ಟಾನಿಕ್.
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಮೊದಲು ನೀರನ್ನು ಕುಡಿಯುವುದು ಅತಿ ಉತ್ತಮ ಹಾಗೂ ಉತ್ತಮ ಅರೋಗ್ಯಕ್ಕಾಗಿ ಖಡ್ಡಾಯವಾಗಿದೆ. ವಾತ, ಪಿತ್ತ ಮತ್ತು ಕಫ ಇವು ಮೂರು ನಮ್ಮ ಹಿಡಿತದಲ್ಲಿ ಇದ್ದರೆ ನಮ್ಮ ಅರೋಗ್ಯವು ಯಾವುದೇ ಸಮಸ್ಯೆಗಳಿಲ್ಲದೆ ಅತಿ ಉತ್ತಮವಾಗಿರುತ್ತದೆ. ನಮ್ಮ ಆಹಾರ ಪದ್ಧತಿಯಲ್ಲಿ ಉತ್ತಮ ಸುಧಾರಣೆಯನ್ನು ತಂದು, ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅತಿ ಅವಶ್ಯಕವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.